

ಬಾನಂಗಳಕ್ಕೆ ನೀಲಿಹಕ್ಕಿ ಹೊತ್ತೊಯ್ದ ಇಸ್ರೋ ಬಾಹುಬಲಿ ರಾಕೆಟ್; LVM3-M6 ಕಾರ್ಯಾಚರಣೆ ಡಿಟೇಲ್ಸ್
ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಭಾರತದ ಇಸ್ರೋ, ತನ್ನ ಬಾಹ್ಯಾಕಾಶ ಸಾಧನೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ಅಮೆರಿಕದ AST ಸ್ಪೇಸ್ಮೊಬೈಲ್ ಸಂಸ್ಥೆಯ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು, ಇಸ್ರೋದ LVM-M6 ಬಾಹುಬಲಿ ರಾಕೆಟ್ ಯಶಸ್ವಿಯಾಗಿ ಕಡಿಮೆ ಭೂಕಕ್ಷೆಗೆ ಸೇರಿಸಿದೆ. ಇಸ್ರೋ ಇದೇ ಮೊದಲ ಬಾರಿಗೆ ಅತಿದೊಡ್ಡ ವಾಣಿಜ್ಯ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಕಾರ್ಯಾಚರಣೆಯ ಮಹತ್ವವೇನು? ದೂರಸಂಪರ್ಕ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಇಲ್ಲಿದೆ ಮಾಹಿತಿ. ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಪ್ರಾಬಲ್ಯಕ್ಕೆ ಮುನ್ನುಡಿ


ಏನ್ರೀ .. ಒಂದು ಘಟನೆಯಾದ ತಕ್ಷಣವೇ ಏನೋ ಆಗೋಗಿಬಿಡ್ತಾ! ಬೆಂಗಳೂರು ದರೋಡೆ ಬಗ್ಗೆ ಸಚಿವರ ಲಘು ಹೇಳಿಕೆ
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಾಬರಿ ಪ್ರಕರಣದ ಕುರಿತು ಹಲವು ಪ್ರತಿಕ್ರಿಯೆಗಳು ಈಗಾಗಲೇ ಕೇಳಿ ಬರುತ್ತಿವೆ. ಕಾಂಗ್ರಸ್ ನ ಸಚಿವರೊಬ್ಬರು ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಾಧ್ಯಮದ ನೀಡಿದ ಹೇಳಿಕೆ ಭಾರಿ ಟೀಕೆಗೆ ಗ್ರಾಸವಾಗುವಂತಿದೆ. ಈ ಘಟನೆ ಕುರಿತು ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಬೆಂಗಳೂರು ದರೋಡೆ ಪ್ರಕರಣದ ಬಗ್ಗೆ ಸರ್ಕಾರವನ್ನು ಸಮರ್ಥಿಸುವ ಭರದಲ್ಲಿ ಏನ್ರೀ .. ಒಂದು ಘಟನೆಯಾದ ತಕ್ಷಣವೇ ಏನೋ ಆಗೋಗಿ ಬಿಡ್ತಾ! ಎಂದು ಮಾಧ್ಯಮವನ್ನೇ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಹಾಡು ಹಗಲೇ ಎಟಿಎಂಗೆ ಹಣ ಸಾಗಿಸುವ ವಾಹನವ











