top of page

ಅಂಕೋಲಾದಲ್ಲಿ ಕರ್ನಾಟಕ ರಣಧೀರರ ವೇದಿಕೆ ಜಿಲ್ಲಾ ಘಟಕ ಉದ್ಘಾಟನೆ

  • Writer: Ananthamurthy m Hegde
    Ananthamurthy m Hegde
  • Nov 18, 2024
  • 1 min read

ಅಂಕೋಲಾ : ಪಟ್ಟಣದ ಕುಂಬಾರಕೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಣಧೀರರ ವೇದಿಕೆಯ ನೂತನ ಜಿಲ್ಲಾ ಘಟಕ ಉದ್ಘಾಟನೆಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಆರ್ ಶಂಕರ್ ಗೌಡ್ರು ನೆರವೇರಿಸಿದರು.

ನೂತನ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ಸೂರಜ್ ಪಾಂಡುರಂಗ ನಾಯ್ಕರನ್ನು  ಆಯ್ಕೆ ಮಾಡಲಾಯಿತು.

ನೂತನ ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಕಿರಣ ಚಂದ್ರಹಾಸ ಗಾಂವಕರ ಮತ್ತು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುಪ್ರಿಯಾ ವಿಷ್ಣು ನಾಯ್ಕ , ಹಾಗೂ  ಇನ್ನಿತರ ಜಿಲ್ಲಾ ಸಮಿತಿ ಸದಸ್ಯರನ್ನು  ಆಯ್ಕೆ ಮಾಡಿ ಆದೇಶ ಪತ್ರ ಮತ್ತು  ಗುರುತಿನ ಚೀಟಿ ವಿತರಿಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಭಾಷೆಯ ತಾರತಮ್ಯ ನೀತಿಯನ್ನು  ಸರ್ಕಾರ ಬಿಡಬೇಕು, ದ್ವಿಭಾಷಾ ನೀತಿ ಜಾರಿಗೆ ತರಬೇಕು. ರಸ್ತೆ ಸುಂಕ ವಸೂಲಾತಿ ಕೇಂದ್ರ (ಟೋಲ್ ಪ್ಲಾಜಾ) ಗಳನ್ನ ತೆರವು ಮಾಡಬೇಕು. ಜಾತಿ ಮತ್ತು ಧರ್ಮಗಳ ತಾರತಮ್ಯ ತೊಲಗಿ ಸಹಬಾಳ್ವೆ ಸಮಾನತೆಯನ್ನು ಒಪ್ಪಿಕೊಳ್ಳುವ ಸಮಾಜವನ್ನು  ನಿರ್ಮಾಣ ಮಾಡುವ  ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕಿದೆ.  ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ ಆರ್ ಶಂಕರ್ ಗೌಡ್ರು ಹೇಳಿದರು.

 ನೂತನ ಅಧ್ಯಕ್ಷ   ಸೂರಜ್ ಪಾಂಡುರಂಗ ನಾಯಕ   ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲಾ ಭಾಗದಲ್ಲಿ  ಹನ್ನೊಂದು ತಾಲ್ಲೂಕುಗಳನ್ನೊಳಗೊಂಡಂತೆ   ಜಿಲ್ಲಾ ಘಟಕವನ್ನು  ಬಲಿಷ್ಠವಾಗಿ ಸಂಘಟಿಸುವುದರ ಜೊತೆಗೆ ನೊಂದವರ ಧ್ವನಿಯಾಗಿ ಬಡವರ ಬೆಂಬಲಿಗರಾಗಿ  ಭ್ರಷ್ಟರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ  ದೊಡ್ಡ ಮಟ್ಟಕ್ಕೆ ಹೋರಾಟ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಭೈರವ, ಪ್ರಧಾನ ಕಾರ್ಯದರ್ಶಿ ಮಹೇಶ್ ಜಿ ಗೌಡ,ಕರಾವಳಿ ಕರ್ನಾಟಕ ಅಧ್ಯಕ್ಷ ಕುಮಾರ್ ನಾಯ್ಕ, ನೆಲಮಂಗಲ ತಾಲ್ಲೂಕು ಘಟಕದ ಅಧ್ಯಕ್ಷ ಮೂರ್ತಿ,ಕೊರಟಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುಸ್ವಾಮಿ ಎಂ ಎನ್, ನೆಲಮಂಗಲ ಜಂಟಿ ಕಾರ್ಯದರ್ಶಿ ರಮೇಶ್, ಉತ್ತರ ಕನ್ನಡ ಜಿಲ್ಲೆಯ  ಜಿಲ್ಲಾ ಸಮಿತಿ ಸದಸ್ಯ ರಾದ ಐಶ್ವರ್ಯ, ವಿವೇಕ್ ,ಹರೀಶ್,ರಘುನಾಥ್, ದಿಲೀಪ್,ಮಹೇಶ್. ಸುಭಾಶ. ಉದಯ. ರವಿ.  ಇತರರು ಹಾಜರಿದ್ದರು.


Comments


Top Stories

bottom of page