Search
ಸಚಿವ ಜಾರಕಿಹೊಳಿ ಭೇಟಿಯಾದ ರವೀಂದ್ರ ನಾಯ್ಕ್
- Ananthamurthy m Hegde
- Nov 29, 2024
- 1 min read

ಶಿರಸಿ: ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ್ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಕಲ್ಪಿಸುವ ಸಿದ್ದಾಪುರ ನಿಲ್ಕುಂದ ಕುಮಟ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜಾರಕಿಹೊಳಿ ನಿಲ್ಕುಂದ ಸಂತೆಗುಳಿ ರಸ್ತೆಯನ್ನು ಸರ್ವಋತು ಮಾಡುವ ಕುರಿತು ಒಂದು ತಿಂಗಳೊಳಘೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದರು.
Comments